
21st June 2025
ಬೆಳಗಾವಿ- ವಿಶ್ವಯೋಗ ದಿನಾಚರಣೆಯ ಪ್ರಯುಕ್ತ ಭಾರತೀಯ ಜನತಾ ಪಾರ್ಟಿ ಬೆಳಗಾವಿ ಗ್ರಾಮಾಂತರ ಜಿಲ್ಲೆ ಹಾಗೂ ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಳದ ಸಂಯುಕ್ತ ಆಶ್ರಯದಲ್ಲಿ . ಪಂತ ಬಾಳೆಕುಂದ್ರಿ ಗ್ರಾಮದ ಶಿವ ಬಸವ ಕಲ್ಯಾಣಮಂಟಪದಲ್ಲಿ ಯೋಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಮಾದಮ್ಮನವರ ಉದ್ಘಾಟಿಸಿ ಯೋಗ ದಿಂದ ಮನಸ್ಸು ಶಾಂತ ವಾಗಿರುತ್ತದೆ. ಪ್ರತಿದಿನ ಅರ್ಧ ಗಂಟೆ ಯೋಗ ಹಾಗೂ ಪ್ರಾಣಾಯಾಮ ಮಾಡುವುದರಿಂದ ಒಳ್ಳೆಯ ಆರೋಗ್ಯ ಸಂಪಾದಿಸಬಹುದು ಮಾತ್ರೆ ಮುಕ್ತ ಜೀವನ ಬೇಕೆಂದರೆ ಪ್ರತಿದಿನ ಯೋಗಾಸನ ಮಾಡಬೇಕು ಒತ್ತಡದ ಜೀವನದಲ್ಲಿ ನಾಗರಿಕರು ಯೋಗ ವ್ಯಾಯಾಮ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡರೆ ಮಾತ್ರ ಒಳ್ಳೆಯ ಆರೋಗ್ಯ ಸಂಪಾದಿಸಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ಮತಿ ದನಶ್ರೀ ಸರ್ದೇಸಾಯಿ .ಬಿಜೆಪಿ ಹಿರಿಯ ಮುಖಂಡ ರಾಜು ದೇಸಾಯಿ, ಜಿಲ್ಲಾ ಪ್ರಕೋಸ್ಟ ಗಳ ಪ್ರಮುಖ ಮಹೇಶ್ ಮೊಹಿತೆ , ಜಿಲ್ಲಾ ಸಂಚಾಲಕ ಡಾ ಗುರು ಕೋತಿನ, ಸಹ ಸಂಚಾಲಕ ಯಲ್ಲೇಶ್ ಕೋಲಕಾರ ,ಜಿಲ್ಲಾ ಕೋಶಾಧ್ಯಕ್ಷ ಸಂತೋಷ್ ದೇಶನೂರ್, ಮನೋಜ ಪಾಟೀಲ, ..ಧನಂಜಯ ಜಾದವ ,ಮಲ್ಲಪ್ಪ ಕಾಂಬಳೆ ,.ವೀರಭದ್ರ ಪೂಜಾರ., ಮಾರುತಿ ಜೋಗಾಣಿ,.ಬಸಪ್ಪ ಗಡಾದ,.ಶಿವಪ್ಪ ದೇಯನವರ.,ಯೋಗ ಶಿಕ್ಷಕಿ ಲಕ್ಷ್ಮಿ ತಳವಾರ ,ಭಾರತಿ ತಳವಾರ.ಹಾಗು ಸಾರ್ವಜನಿಕರರು ಉಪಸ್ಥಿತರಿದ್ದರು.
undefined
ಶ್ರೀಮತಿ ತಂಗವ್ವ ನಂದಪ್ಪ ಬಾಗೇವಾಡಿ ಇವರ ಶತಮಾನೋತ್ಸವದ ಕಾರ್ಯಕ್ರಮ ಮತ್ತು ಪ್ರಶಸ್ತಿ ಪ್ರಧಾನ ಹಾಗೂ ಸನ್ಮಾನ ಸಮಾರಂಭ
ಬೈಲಹೊಂಗಲದಲ್ಲಿ ಮಲಪ್ರಭಾ ಹಾಸ್ಪಿಟಲ್ ಉದ್ಘಾಟನೆ ನೂತನ ಆಸ್ಪತ್ರೆಯಿಂದ ಜನರ ಆರೋಗ್ಯ ಸಮಸ್ಯೆ ದೂರವಾಗಲಿ - ಡಾ.ಶಿವಾನಂದ ಭಾರತಿ ಸ್ವಾಮಿಜಿ
ಕನ್ನಡದ ಹೆಸರಾಂತ ಕಲಾವಿದ ರಂಗಕರ್ಮಿ ಕನ್ನಡಪರ ಹೋರಾಟಗಾರ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾದ ಕೆ ವಿ ನಾಗರಾಜ ಮೂರ್ತಿ ಹಾಗೂ ಪ್ರಿಯಾಂಕ ಮಾಸಪತ್ರಿಕೆ ಎಕ್ಸಿಕ್ಯೂಟಿವ್ ಸಂಪಾದಕಿ ಎಸ್. ಜಿ. ತುಂಗಾ ರೇಣುಕಾ ದಂಪತಿಗಳಿಂದ ಮುಂಜಾನೆ ಬೆಳಕು